ಮಂಗಳೂರು

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ

ಮಂಗಳೂರು - 2013

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು 2013ರಲ್ಲಿ ಮಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿತು. ಬಿಡಿಬಿಡಿಯಾಗಿ ಮಹಿಳಾ ಸಂಘಟನೆಗಳು ಸ್ಥಳೀಯವಾಗಿ ನಡೆಸುವ ಮಹಿಳಾ ದಿನಾಚರಣೆಗಳ ಅರಿವು ಅನುಭವಗಳು ಏಕಕಾಲದಲ್ಲಿ ಎಲ್ಲರಿಗೂ ಸಂವಹನಗೊಳ್ಳುವುದು ಸಾಧ್ಯವಿರಲಿಲ್ಲ.

ಸಂಘಟನೆಗಳೆಲ್ಲ ಒಟ್ಟಾಗಿ ಸೇರಿ ಮಹಿಳಾ ದಿನಾಚರಣೆಯನ್ನು ಆಚರಿಸುವುದು, ಲಿಂಗಸೂಕ್ಷ್ಮತೆ ಕಾರ್ಯಾಗಾರ ನಡೆಸುವುದು, ಜಾಥಾ ಮೌನಜಾಗೃತಿ ನಡೆಸುವುದು, ಬೃಹತ್ ಸಮಾವೇಶಕ್ಕೆ ಹಲವರು ಕೈಜೋಡಿಸಿ ತಯಾರಿ ನಡೆಸುವುದೇ ಮೊದಲಾದ ಕ್ರಿಯೆಗಳಿಂದ ಏರ್ಪಡುವ ಸೋದರಿತ್ವ ಮತ್ತು ಸ್ನೇಹಜಾಲ ಇಂದಿಗೆ ಅವಶ್ಯ. ಗರಿಷ್ಠ ಪ್ರಮಾಣದ ಸಂವಹನ ಸಾಧ್ಯತೆಯಿಂದಾಗಿ ಹೋರಾಟದ ಅನುಭವ ಲೋಕ ಮತ್ತೂ ವಿಶಾಲಗೊಂಡು ಬಹುಮುಖಿ ಚಿಂತನೆಗಳನ್ನೊಳಗೊಳ್ಳಲು ಇದರಿಂದ ಸಾಧ್ಯವಾಗಬಲ್ಲದೆಂಬ ಹಿರಿಯಾಸೆ ಈ ಒಕ್ಕೂಟದ್ದು.

  • ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಮತ್ತು ಮಹಿಳಾ ಸಂಘಗಳ ಜಾಲದ ಆಶ್ರಯದಲ್ಲಿ ಮೊದಲ ಸಮಾವೇಶ. `ಇನ್ನು ಸಾಕು’ ಘೋಷವಾಕ್ಯ.
  • ಮಾರ್ಚ್ 7-ವಿಚಾರ ಸಂಕಿರಣ-ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ. ಮಹಿಳೆಯರ ಮೇಲಿನ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಸಾಮಾಜಿಕ ನೆಲೆಗಳು, ಜಾತಿಯ ನೆಲೆ, ಕೌಟುಂಬಿಕ ನೆಲೆ, ಕೆಲಸದ ಸ್ಥಳ/ ಸಾರ್ವಜನಿಕ ಸ್ಥಳ, ಪೊಲೀಸ್/ ನ್ಯಾಯಾಂಗ ವ್ಯವಸ್ಥೆ ಕುರಿತು ಚರ್ಚೆ ನಡೆಯಿತು.
  • ಮುಖ್ಯ ಭಾಷಣಕಾರರಾಗಿ ಪ್ರಸಿದ್ಧ ಮರಾಠಿ ಲೇಖಕಿ ಹಾಗೂ ದಲಿತ ಚಳುವಳಿಗಾರರು ಆದ ಶ್ರೀಮತಿ ಊರ್ಮಿಳಾ ಪವಾರ್ ಪಾಲ್ಗೊಂಡರು.
single-img-six

ಮಂಗಳೂರು - 2013