ಮೈಸೂರು

2014ರಲ್ಲಿ ಮೈಸೂರಿನಲ್ಲಿ ನಡೆದ ಸಮಾವೇಶ, ಜಾಥಾ.

ಮೈಸೂರು - 2014

‘ಮಹಿಳೆಯರೆ ಒಂದಾಗಿ ಸಮಾನತೆಗೆ ಮುಂದಾಗಿ’ ಘೋಷವಾಕ್ಯದೊಂದಿಗೆ.

ಮಹಿಳಾ ದಿನಾಚರಣೆಗೆ ಮಣಿಪುರದ ‘ಮೀರಾ ಪೈಬಿ’ (ಪಂಜು ಹಿಡಿದ ಮಹಿಳೆಯರು) ಆಂದೋಲನ ಗುಂಪಿನ ಪ್ರತಿನಿಧಿಗಳಾಗಿ ಇಮಾ ನಾನ್ಬಿ, ಚಿತ್ರಾ ಅಹೆಂತಮ್ ಮತ್ತು ರೇಣು ತಕೆಲೆಂಬಂ ಅವರುಗಳು ವಿಶೇಷ ಆಹ್ವಾನಿತರಾಗಿದ್ದರು.

  • 2014 ಮಾರ್ಚ್ 7 ರಂದು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ವಿಚಾರ ಸಂಕಿರಣವನ್ನು ಆಯೋಜಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿತು.
  • ಮಹಿಳೆ-ಕಾನೂನು, ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ವಿಚಾರ ಸಂಕಿರಣದಲ್ಲಿ ಚರ್ಚಿಸಲಾಯಿತು. ಅದಕ್ಕೆ ಪೂರಕವಾಗಿ ಮೊದಲೇ ವಿದ್ಯಾರ್ಥಿಗಳಿಗೆ ಮಹಿಳಾ ವಿಷಯಗಳನ್ನೊಳಗೊಂಡ ಆಶುಭಾಷಣ ಸ್ಪರ್ಧೆ ಏರ್ಪಡಿಸಿ ಹುರಿದುಂಬಿಸಿತ್ತು. ಸಂಕಿರಣದ ದಿನ ಬಹುಮಾನ ನೀಡಲಾಯಿತು.
  • ಕರ್ನಾಟಕದ ವಿವಿಧ ಭಾಗಗಳ ಮಹಿಳಾ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯತರ್ಕರು ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡದ್ದು ವಿಚಾರ ಸಂಕಿರಣಕ್ಕೆ ಅಭೂತಪೂರ್ವ ಯಶಸ್ಸನ್ನು ನೀಡಿತು. ದಿಕ್ಸೂಚಿ ಮಾತನಾಡಲು ಬೆಂಗಳೂರಿನ ವಿಮೋಚನಾ ಸಂಸ್ಥೆಯ ಕಾರಿನ್ ಕುಮಾರ್ ಬಂದಿದ್ದರು.
  • ಆ ದಿನ ಸಂಜೆ ಗಾಂಧಿ ಚೌಕದಲ್ಲಿ ನಡೆದ `ವಿಮೆನ್ ಇನ್ ಬ್ಲ್ಯಾಕ್’ ಮೌನಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಗಮನಾರ್ಹ ಸಂಗತಿ.
  • ತುಂತುರು ಮಳೆಯಲ್ಲಿಯೇ ನೆನೆಯುತ್ತಾ ಸಾವಿರ ಸಂಖ್ಯೆಯಲ್ಲಿ ಕಪ್ಪು ಉಡುಗೆ ತೊಟ್ಟ ಹೋರಾಟಗಾರರ ಕೈಯಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಘೋಷಣಾವಾಕ್ಯಗಳ ಫಲಕಗಳಿದ್ದವು.
  • ಕತ್ತಲಾಗುತ್ತಿದ್ದಂತೆ, ಒಬ್ಬರಿಂದ ಒಬ್ಬರಿಗೆ ಮೇಣದ ಬತ್ತಿಗಳನ್ನು ಹಚ್ಚಿಕೊಟ್ಟು ಏಕ ಕಾಲದಲ್ಲಿ ಸಾವಿರ ಸಂಖ್ಯೆಯ ದೀಪದ ಕುಡಿಗಳನ್ನು ಗಾಂಧಿ ಪ್ರತಿಮೆಯ ಸುತ್ತಾ ಬೆಳಗಿಸಲಾಯಿತು.
  • ಅರಿವಿನ ಬೆಳಕಿದ್ದಲ್ಲಿ ಅಜ್ಞಾನ – ಕ್ರೌರ್ಯದ ಕತ್ತಲೆಗೆ ಸ್ಥಾನವಿಲ್ಲ.

ಮೈಸೂರು - 2014